SRI S Mahaveer GROUP Construction contactors

SRI S Mahaveer GROUP Construction contactors SRI MAHAVEER GROUP Construction Fabrication Turnkey contractors.we r intrested taking contract Turnkey base.we built villas Apartments projectscl9448170873

🌅. *JAI JINENDRA sa Suprabatham* 🙏✍️Call it what you want Fate, Chance, Divine Intervention or anything else. We are oft...
07/08/2025

🌅. *JAI JINENDRA sa Suprabatham* 🙏

✍️Call it what you want Fate, Chance, Divine Intervention or anything else.

We are often clueless when it comes to times in our life, when we need help. We often wonder will anyone help me. I don't know many people, will any friend offer to help. Where would even a helping hand come from.

But Life teaches us more often than not, that the Right people will cross your path, often most unexpectedly, when the time is right for you. You won't know how, you won't know when, and your will never know why. But it will happen.

That is when you wonder, was it by Fate, by Chance, it by anything else. What you give to the world always has a way of coming back to you in more ways than you can ever imagine.

Keep Smiling 😀

Be Happy 😃

Have another amazing day ahead.......……………………….😁 *Mahaveer b Jujin*🥰

07/08/2025

🌅. *JAI JINENDRA sa Suprabatham* 🙏

✍️Call it what you want Fate, Chance, Divine Intervention or anything else.

We are often clueless when it comes to times in our life, when we need help. We often wonder will anyone help me. I don't know many people, will any friend offer to help. Where would even a helping hand come from.

But Life teaches us more often than not, that the Right people will cross your path, often most unexpectedly, when the time is right for you. You won't know how, you won't know when, and your will never know why. But it will happen.

That is when you wonder, was it by Fate, by Chance, it by anything else. What you give to the world always has a way of coming back to you in more ways than you can ever imagine.

Keep Smiling 😀

Be Happy 😃

Have another amazing day ahead.......……………………….😁 *Mahaveer b Jujin*🥰

Good morning
07/08/2025

Good morning

07/08/2025

Better than apple🍎

07/08/2025

Namostu gurudev anant koti pranaam

06/08/2025
06/08/2025

*✨ಹಿತ್ತಾಳೆದೀಪ*
ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಹಿತ್ತಾಳೆ ದೀಪವು ಬಹುಕಾಲದಿಂದ ಬಳಕೆಯಲ್ಲಿದೆ. ಚಿನ್ನ ಮತ್ತು ಬೆಳ್ಳಿಯಷ್ಟು ದುಬಾರಿಯಲ್ಲದಿದ್ದರೂ, ಹಿತ್ತಾಳೆ ದೀಪಕ್ಕೆ ತನ್ನದೇ ಆದ ವಿಶಿಷ್ಟ ಮಹತ್ವವಿದೆ.

*ಹಿತ್ತಾಳೆ ಲೋಹದ ಮಹತ್ವ*
ಹಿತ್ತಾಳೆಯು ತಾಮ್ರ ಮತ್ತು ಸತುವಿನ ಮಿಶ್ರಲೋಹವಾಗಿದೆ. ಈ ಎರಡೂ ಲೋಹಗಳು ತಮ್ಮದೇ ಆದ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಹೊಂದಿವೆ.

*ತಾಮ್ರದ ಮಹತ್ವ:* ತಾಮ್ರವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಲೋಹವೆಂದು ಪರಿಗಣಿಸಲಾಗಿದೆ. ಇದು ಶುದ್ಧತೆ, ಪವಿತ್ರತೆ ಮತ್ತು ದೈವಿ ಗುಣಗಳನ್ನು ಹೊಂದಿದೆ. ಹಲವು ಪೂಜಾ ವಿಧಿಗಳಲ್ಲಿ ತಾಮ್ರದ ಪಾತ್ರೆಗಳನ್ನೇ ಬಳಸಲಾಗುತ್ತದೆ.

*ಸತುವಿನ ಮಹತ್ವ:* ಸತುವನ್ನು (ಜಿಂಕ್) ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

*ಧನಾತ್ಮಕ ಶಕ್ತಿಗಳ ಆಕರ್ಷಣೆ:*
ತಾಮ್ರ ಮತ್ತು ಸತುವಿನ ಮಿಶ್ರಣವಾದ ಹಿತ್ತಾಳೆ, ಸುತ್ತಮುತ್ತಲಿನ ವಾತಾವರಣದಿಂದ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಿ, ಧನಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ.

*ಆರೋಗ್ಯಕರ ಗುಣಗಳು:*
ಆಯುರ್ವೇದದಲ್ಲಿ ಹಿತ್ತಾಳೆ ಪಾತ್ರೆಗಳಲ್ಲಿ ಆಹಾರ ಸೇವಿಸುವುದರಿಂದ ಮತ್ತು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಿತ್ತಾಳೆಯು ಸೂಕ್ಷ್ಮಜೀವಿ ವಿರೋಧಿ ಗುಣಗಳನ್ನು ಹೊಂದಿದೆ ಎನ್ನಲಾಗಿದೆ. ದೀಪದ ರೂಪದಲ್ಲಿ ಬಳಸಿದಾಗಲೂ, ಇದು ವಾತಾವರಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

**ಗುರು ಗ್ರಹದ ಸಂಬಂಧ:*
ಹಿತ್ತಾಳೆಯು ಗುರು ಗ್ರಹದೊಂದಿಗೆ ಸಂಬಂಧ ಹೊಂದಿದೆ. ಗುರುವು ಜ್ಞಾನ, ಸಂಪತ್ತು, ಅದೃಷ್ಟ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಪ್ರತೀಕ. ಹಿತ್ತಾಳೆ ದೀಪವನ್ನು ಬೆಳಗುವುದರಿಂದ ಗುರು ಗ್ರಹದ ಶುಭ ಪರಿಣಾಮಗಳು ಹೆಚ್ಚಾಗುತ್ತವೆ ಎಂದು ನಂಬಲಾಗಿದೆ.

ಹಿತ್ತಾಳೆ ದೀಪ ಬೆಳಗುವುದರ *ಪ್ರಯೋಜನಗಳು*

*ಸಂಪತ್ತು ಮತ್ತು ಸಮೃದ್ಧಿ:*
ಹಿತ್ತಾಳೆಯು ತಾಮ್ರ ಮತ್ತು ಸತುವಿನಿಂದಾಗಿ ಸಿದ್ಧವಾದ ಲೋಹ ಲಕ್ಷ್ಮೀ ದೇವಿಗೆ ಪ್ರಿಯವಾಗಿರುವ ಲೋಹ. ಹಿತ್ತಾಳೆ ದೀಪವನ್ನು ನಿಯಮಿತವಾಗಿ ಬೆಳಗುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚುತ್ತದೆ, ಸಂಪತ್ತು ಮತ್ತು ಸಮೃದ್ಧಿ ನೆಲೆಸುತ್ತದೆ.

*ನಕಾರಾತ್ಮಕ ಶಕ್ತಿ ನಿವಾರಣೆ:*
ಹಿತ್ತಾಳೆಯು ನಕಾರಾತ್ಮಕ ಶಕ್ತಿಗಳನ್ನು ದೂರಮಾಡುವ ಗುಣವನ್ನು ಹೊಂದಿದೆ. ದೀಪದ ಬೆಳಕಿನೊಂದಿಗೆ ಹಿತ್ತಾಳೆಯ ಧನಾತ್ಮಕ ಗುಣಗಳು ಸೇರಿ, ಮನೆಯ ವಾತಾವರಣವನ್ನು ಶುದ್ಧೀಕರಿಸಿ, ಶಾಂತಿಯುತವಾಗಿಸುತ್ತದೆ. ಇದು ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ.

*ಶಾಂತಿ ಮತ್ತು ಏಕಾಗ್ರತೆ:*
ಹಿತ್ತಾಳೆ ದೀಪದ ಸ್ಥಿರವಾದ ಜ್ವಾಲೆಯು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಇದು ಧ್ಯಾನ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಿಗೆ ಪೂರಕವಾಗಿದೆ, ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

*ಆಧ್ಯಾತ್ಮಿಕ ಬೆಳವಣಿಗೆ:*
ದೀಪವು ಜ್ಞಾನ ಮತ್ತು ಆತ್ಮಜ್ಞಾನದ ಸಂಕೇತ. ಹಿತ್ತಾಳೆ ದೀಪವನ್ನು ಬೆಳಗುವುದು ನಿಮ್ಮ ಆಧ್ಯಾತ್ಮಿಕ ಪಯಣದಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಸ್ಪಷ್ಟತೆಯನ್ನು ನೀಡುತ್ತದೆ.

*ಸೌಭಾಗ್ಯ ಮತ್ತು ಅದೃಷ್ಟ:*
ಮನೆಯಲ್ಲಿ ಹಿತ್ತಾಳೆ ದೀಪವನ್ನು ಬೆಳಗುವುದರಿಂದ ಸೌಭಾಗ್ಯ ಮತ್ತು ಅದೃಷ್ಟ ಹೆಚ್ಚುತ್ತದೆ ಎಂದು ನಂಬಲಾಗಿದೆ. ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಹಿತ್ತಾಳೆ ದೀಪವನ್ನು ಬೆಳಗುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.


*ದೀಪಂಜ್ಯೋತಿಃ ಪರಬ್ರಹ್ಮ ದೀಪಂಜ್ಯೋತಿಃ ಜನಾರ್ದನಃ* |
*ದೀಪೋ ಹರತು ಮೇ ಪಾಪಂ*
*ದೀಪಜ್ಯೋತಿರ್ನಮೋಽಸ್ತುತೇ* ||
(ದೀಪದ ಜ್ಯೋತಿಯು ಪರಬ್ರಹ್ಮ ಸ್ವರೂಪ, ದೀಪದ ಜ್ಯೋತಿಯು ಜನಾರ್ದನ (ವಿಷ್ಣು). ಈ ದೀಪವು ನನ್ನ ಪಾಪಗಳನ್ನು ಹೋಗಲಾಡಿಸಲಿ, ದೀಪದ ಜ್ಯೋತಿಗೆ ನನ್ನ ನಮಸ್ಕಾರಗಳು.)
ಈ ಶ್ಲೋಕವು ದೀಪವನ್ನು ಸಾಕ್ಷಾತ್ ದೇವರ ಸ್ವರೂಪವೆಂದು ವರ್ಣಿಸುತ್ತದೆ.

*ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ* |
*ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಽಸ್ತುತೇ* ||
(ಶುಭವನ್ನು, ಮಂಗಳವನ್ನು, ಆರೋಗ್ಯವನ್ನು, ಧನಸಂಪತ್ತನ್ನು ನೀಡುವವನೇ, ಶತ್ರುಬುದ್ಧಿಯನ್ನು ನಾಶಮಾಡುವವನೇ ದೀಪ ಜ್ಯೋತಿಯೇ, ನಿನಗೆ ನನ್ನ ನಮಸ್ಕಾರಗಳು.)
ಹಿತ್ತಾಳೆಯು ಸಮೃದ್ಧಿ ಮತ್ತು ಮಂಗಳಕರ ಗುಣಗಳನ್ನು ಹೊಂದಿದ್ದು, ಈ ಶ್ಲೋಕದ ಆಶಯಗಳನ್ನು ಹಿತ್ತಾಳೆ ದೀಪದ ಮೂಲಕ ಸಾಧಿಸಬಹುದು.
ಹಿತ್ತಾಳೆ ದೀಪವನ್ನು ಬೆಳಗುವಾಗ ಗಮನಿಸಬೇಕಾದ ಅಂಶಗಳು

*ಶುಚಿತ್ವ:*
ಹಿತ್ತಾಳೆ ದೀಪವನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಇದು ಗಾಳಿಯೊಂದಿಗೆ ಆಕ್ಸಿಡೀಕರಣಗೊಂಡು ಕಪ್ಪಾಗಬಹುದು. ಹುಣಸೆಹಣ್ಣು, ನಿಂಬೆಹಣ್ಣು ಅಥವಾ ಹಿತ್ತಾಳೆ ಪಾಲಿಶ್ ಬಳಸಿ ಅದನ್ನು ಹೊಳೆಯುವಂತೆ ಇಟ್ಟುಕೊಳ್ಳಬೇಕು. ಶುದ್ಧವಾದ ದೀಪವು ಹೆಚ್ಚು ಧನಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ.

*ಉತ್ತಮ ಗುಣಮಟ್ಟದ ಎಣ್ಣೆ ಮತ್ತು ಬತ್ತಿ:*
ಹಸುವಿನ ಶುದ್ಧ ತುಪ್ಪ ಅಥವಾ ಶುದ್ಧ ಎಳ್ಳೆಣ್ಣೆಯನ್ನು ಬಳಸಿ ದೀಪವನ್ನು ಬೆಳಗಬೇಕು. ಶುದ್ದ ಹತ್ತಿಯ ಬತ್ತಿಯನ್ನು ಬಳಸುವುದು.

*ನಿಯಮಿತ ಆಚರಣೆ:*
ಪ್ರತಿದಿನ, ವಿಶೇಷವಾಗಿ ಸಂಧ್ಯಾಕಾಲದಲ್ಲಿ, ಹಿತ್ತಾಳೆ ದೀಪವನ್ನು ಬೆಳಗುವುದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತವೆ.
ಹಿತ್ತಾಳೆ ದೀಪವು ಕೇವಲ ಒಂದು ಉಪಕರಣವಲ್ಲ, ಅದು ನಮ್ಮ ಆಧ್ಯಾತ್ಮಿಕ ಆಚರಣೆಗಳಲ್ಲಿ ಒಂದು ಪ್ರಮುಖ ಭಾಗವಾಗಿದೆ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿ, ಶಾಂತಿ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ತರಲು ಸಹಾಯ ಮಾಡುತ್ತದೆ

*ಒಳಗಿನ ಸತ್ಯ.*       ಒಬ್ಬ ಯುವ ಸನ್ಯಾಸಿ, ಒಬ್ಬ ಮಾರ್ಗದರ್ಶಿಯ ಹುಡುಕಾಟದಲ್ಲಿ ಅಲೆಯುತ್ತಿದ್ದ. ಯಾರಾದರೂ ನನಗೆ ಪ್ರೇರಣೆ ನೀಡಬಹುದು, ಬದುಕಿನ ...
06/08/2025

*ಒಳಗಿನ ಸತ್ಯ.*

ಒಬ್ಬ ಯುವ ಸನ್ಯಾಸಿ, ಒಬ್ಬ ಮಾರ್ಗದರ್ಶಿಯ ಹುಡುಕಾಟದಲ್ಲಿ ಅಲೆಯುತ್ತಿದ್ದ. ಯಾರಾದರೂ ನನಗೆ ಪ್ರೇರಣೆ ನೀಡಬಹುದು, ಬದುಕಿನ ಮಾರ್ಗವನ್ನು ತೋರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ. ಅಂತೂ ಅವನಿಗೊಬ್ಬ ವೃದ್ಧ ಸನ್ಯಾಸಿ ಸಿಕ್ಕರು. ಆತ ಆ ವೃದ್ಧ ಸನ್ಯಾಸಿಯೊಂದಿಗೆ ಸಹಯಾತ್ರಿಯಾದ.

ಆ ವೃದ್ಧ ಸನ್ಯಾಸಿ, ತನ್ನ ಜೊತೆ ಬರಲು ಇವನಿಗೊಂದು ಶರತ್ತನ್ನು ಒಡ್ಡಿದ. ಅದಂದರೆ, ನಾನು ಏನೇ ಮಾಡಿದರೂ, ನೀನು ಆ ಸಂದರ್ಭದಲ್ಲಿ , ಏನೂ ಕೇಳದೇ, ಸುಮ್ಮನೆ ಇರಬೇಕು.ಹೀಗೆ ಯಾಕೆ ಎಂದು ಪ್ರಶ್ನೆಗಳನ್ನು ಕೇಳಬಾರದು. ನಾನು ಏನೇ ಮಾಡಿದರೂ, ಅದನ್ನು ನಿನಗೆ ಹೇಳುವುದಿಲ್ಲ . ನೀನೇನಾದರೂ ಪ್ರಶ್ನೆ ಕೇಳಿದರೆ, ನೀನು ನನ್ನ ಜೊತೆ ಬರುವ ಹಾಗಿಲ್ಲ. ಇದಕ್ಕೆ ನಿನ್ನ ಸಮ್ಮತಿ ಇದ್ದರೆ ನೀನು ನನ್ನ ಜೊತೆ ಬರಬಹುದು ಎಂದು ಹೇಳಿದ. ಯುವ ಸನ್ಯಾಸಿ ಇವನ ಶರತ್ತನ್ನು ಒಪ್ಪಿಕೊಂಡ .

‌‌. ನಂತರ ಅವರಿಬ್ಬರು ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಮೊದಲ ರಾತ್ರಿ ಒಂದು ನದಿಯ ತೀರದಲ್ಲಿ ಮಲಗಿ ಬೆಳಗ್ಗೆ ಎದ್ದು ಆ ನದಿಯಲ್ಲಿ ಕಟ್ಟಲಾಗಿದ್ದ ದೋಣಿಯಲ್ಲಿ ಕುಳಿತು ನದಿಯನ್ನು ದಾಟ ತೊಡಗಿದರು. ಅಂಬಿಗನು ಅವರು ಸನ್ಯಾಸಿಗಳೆಂದು ತಿಳಿದು, ಅವರಿಂದ ಕಾಸು ತೆಗೆದುಕೊಳ್ಳದೇ, ಉಚಿತವಾಗಿ ದಾಟಿಸತೊಡಗಿದ. ನದಿಯನ್ನು ದಾಟುತ್ತಿರುವಾಗಲೇ, ವೃದ್ಧ ಸನ್ಯಾಸಿ, ಕದ್ದು ಮುಚ್ಚಿ ಅಂಬಿಗನಿಗೆ ಕಾಣದಂತೆ ,ಆ ದೋಣಿಯಲ್ಲಿ ಒಂದು ದೊಡ್ಡ ರಂಧ್ರವನ್ನು ಕೊರೆಯ ತೊಡಗಿದ. ಇದನ್ನು ಗಮನಿಸಿದ ಯುವ ಸನ್ಯಾಸಿಗೆ ಇದೇನು ಇವರು ಹೀಗೆ ಮಾಡುತ್ತಿದ್ದಾರೆ , ಎಂದು ಆಶ್ಚರ್ಯವಾಯಿತು. ಪಾಪ, ಈ ಅಂಬಿಗ ಮಾಡಿದ ಉಪಕಾರಕ್ಕೆ ಇದೇ ನಾವು ಕೊಡುವ ಕಾಣಿಕೆಯೇ, ಎಂದು ಅವನಿಗೆ ಅನಿಸಿತು. ಆತ ಇವರನ್ನು ಉಚಿತವಾಗಿ ನದಿ ದಾಟಿಸಿದ್ದ.ನದಿ ದಾಟಿ ಇನ್ನೂ ಕೆಳಕ್ಕೆ ಇಳಿದು ಎರಡು ಹೆಜ್ಜೆ ನೆಡೆದಿಲ್ಲ, ಅಷ್ಟರಲ್ಲೇ ಯುವಕನಿಗೆ ಆತನಿಗೆ ನೀಡಿದ ಶರತ್ತಿನ ವಿಚಾರ ಮರೆತು ಹೋಯಿತು.

ಯುವ ಸನ್ಯಾಸಿ, ವೃದ್ಧ ಸನ್ಯಾಸಿಯನ್ನು ಕೇಳಿಯೇ ಬಿಟ್ಟ. ನೀವು ಒಬ್ಬ ಸನ್ಯಾಸಿಯಾಗಿ ನೀವು ಮಾಡಿದ ಕೆಲಸ ನೋಡಿ ನನಗೆ ತುಂಬಾ ಬೇಸರವಾಗುತ್ತಿದೆ, ಆ ಅಂಬಿಗ ನಮ್ಮನ್ನು ಎಷ್ಟು ಪ್ರೀತಿಯಿಂದ ಉಚಿತವಾಗಿ ಬೆಳಗಿನ ಜಾವದಲ್ಲಿ ನದಿ ದಾಟಿಸಿದ. ಆದರೆ ನೀವು ಆತನ ದೋಣಿಯಲ್ಲಿ ರಂದ್ರ ಕೊರೆದದ್ದು , ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವನು ಮಾಡಿದ ಉಪಕಾರಕ್ಕೆ ನೀವು ಮಾಡಿದ್ದು ಸರಿಯೇ ಎಂದು, ಕೇಳಿದ.

ವೃದ್ಧಸನ್ಯಾಸಿ , ನೀನು ಶರತ್ತನ್ನು ಮುರಿದೆ, ನಾನು ನಿನಗೆ ಯಾವುದೇ ಪ್ರಶ್ನೆಗಳನ್ನು ಕೇಳಬಾರದು ಎಂದು ಹೇಳಿದ್ದನ್ನು ಮರೆತುಬಿಟ್ಟೆಯಾ? ಇನ್ನು ನೀನು ನನ್ನಿಂದ ದೂರ ಹೊರಟುಬಿಡು, ನೀನು ಹೊರಡುವುದೇ ಆದರೆ, ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಕೇಳಿಸಿಕೋ, ಒಂದು ವೇಳೆ ನನ್ನ ಜೊತೆಯಲ್ಲಿ ಬರುವೆಯಾದರೆ, ಈ ಸಲ ಕ್ಷಮಿಸುತ್ತೇನೆ, ಮುಂದೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ.

ಯುವ ಸನ್ಯಾಸಿಗೆ ತನ್ನ ತಪ್ಪಿನ ಅರಿವಾಯಿತು, ಆತ ಕ್ಷಮೆ ಕೇಳಿದ. ತನ್ನಿಂದ ಇಷ್ಟು ಸಂಯಮದಿಂದ ಇರಲು ಸಾಧ್ಯವಾಗಲಿಲ್ಲವಲ್ಲ ಎಂದು ಆತನಿಗೆ ಬೇಸರವಾಯಿತು.

ಆದರೆ ಮಾರನೇ ದಿನ ಅವನ ಸಂಯಮ ಮುರಿಯುವಂತಹ ಒಂದು ಘಟನೆ ಸಂಭವಿಸಿತು. ಅವರು ಒಂದು ಕಾಡಿನಲ್ಲಿ ಹೋಗುತ್ತಿದ್ದಾಗ, ಆ ರಾಜ್ಯದ ರಾಜ ಕಾಡಿನಲ್ಲಿ ಬೇಟೆ ಯಾಡಲು ಬಂದಿದ್ದ. ಆತ ಇವರನ್ನು ನೋಡಿ ತುಂಬಾ ಗೌರವದಿಂದ ನೆಡೆದುಕೊಂಡ. ಅವರೆಲ್ಲರೂ ಕುದುರೆಯಲ್ಲಿ ಕುಳಿತುಕೊಂಡು ಅವರ ರಾಜಧಾನಿಗೆ ಹಿಂತಿರುಗುತ್ತಿದ್ದರು. ರಾಜ ಇವರನ್ನೂ ತನ್ನ ಅರಮನೆಗೆ ಆಹ್ವಾನಿಸಿ,ತನ್ನ ಏಕಮಾತ್ರ ಪುತ್ರ ಯುವ ರಾಜಕುಮಾರನ ಜೊತೆಯಲ್ಲಿ ವೃದ್ಧ ಸನ್ಯಾಸಿಯನ್ನು ಕುದುರೆಯಲ್ಲಿ ಕೂರಿಸಿದ. ಕುದುರೆಗಳು ಅವರ ರಾಜಧಾನಿಯ ಕಡೆಗೆ ಹೊರಟವು. ರಾಜ ಕೂತಿದ್ದ ಕುದುರೆ ಮುಂದೆ ಓಡುತ್ತಿತ್ತು, ಇಬ್ಬರು ಸನ್ಯಾಸಿಗಳು ಕೂತಿದ್ದ ಕುದುರೆ ಹಿಂದಾಯಿತು. ಸ್ವಲ್ಪ ಸಮಯದ ನಂತರ, ಇಬ್ಬರು ಸನ್ಯಾಸಿಗಳೂ, ಸ್ವಲ್ಪ ದೂರ ದೂರವಾದರು. ಆಗ ವೃದ್ಧ ಸನ್ಯಾಸಿ, ಯಾರು ಹತ್ತಿರದಲ್ಲಿ ಇಲ್ಲದಿರುವುದನ್ನು ಕಂಡು, ಯುವ ರಾಜಕುಮಾರನನ್ನು ಕೆಳಗಿಳಿಸಿ, ಅವನನ್ನು ಚೆನ್ನಾಗಿ ಥಳಿಸಿ, ಅವನ ಕೈ ತಿರುಚಿ ಮುರಿದುಬಿಟ್ಟ. ನಂತರ, ಯುವ ಸನ್ಯಾಸಿ ಹತ್ತಿರ ಬಂದ ತಕ್ಷಣ, ಅವನನ್ನು ಕುದುರೆಯಿಂದ ಇಳಿಸಿ, ಅವನನ್ನು ಕರೆದುಕೊಂಡು, ಇಬ್ಬರೂ ಅಲ್ಲಿಂದ ವೇಗವಾಗಿ ಓಡಿಹೋದರು.

ಈ ಘಟನೆಯಿಂದ, ಯುವ ಸನ್ಯಾಸಿಗೆ ಇನ್ನು ತಾಳ್ಮೆಯಿಂದ ಇರಲು ಸಾಧ್ಯವಾಗಲಿಲ್ಲ. ಅವನಿಗೆ ಪುನಃ ವೃದ್ಧ ಸನ್ಯಾಸಿ ಹಾಕಿದ ಶರತ್ತು ಮರೆತು ಹೋಯಿತು. ಅವನ ಮೇಲೆ ಸ್ವಲ್ಪ ಕೋಪವೂ ಬಂತು. ಯಾವ ರಾಜ ನಮ್ಮನ್ನು ಸ್ವಾಗತಿಸಿ, ಆದರಿಸಿ, ಕುದುರೆ ಸವಾರಿಗೆ ಅವಕಾಶ ಕೊಟ್ಟು, ವಿಶ್ವಾಸದಿಂದ ತನ್ನ ಅರಮನೆಗೆ ಬರುವಂತೆ ಆಮಂತ್ರಣವಿತ್ತಿದ್ದನೊ, ನೀವು ಆತನ ಏಕ ಮಾತ್ರ ಪುತ್ರನ ಮೇಲೆ ದಾಳಿ ಮಾಡಿ ಅವನ ಕೈ ಮುರಿದು ಅವನನ್ನು ಕಾಡಿನಲ್ಲೇ ಬಿಟ್ಟು ಬಂದಿದ್ದೀರಿ, ಇದೇನಿದು, ನಿಮ್ಮ ನೀಚ ತನ, ನನಗೆ ಇದಕ್ಕೆ ಉತ್ತರ ಬೇಕೇ ಬೇಕು ಎಂದು ಹೇಳಿದ.

ವೃದ್ಧಸನ್ಯಾಸಿ, ಮತ್ತೆ ನೀನು ನನ್ನ ಶರತ್ತನ್ನು ಮುರಿದೆ, ಇನ್ನು ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ, ನೀನಿನ್ನು ಹೊರಡಬಹುದು, ಹಾಗೂ ನಿನ್ನ ಎರಡೂ ,ಪ್ರಶ್ನೆಗಳಿಗೆ ಈಗ ಉತ್ತರ ತಿಳಿದು ಕೊಂಡು ಹೊರಡು, ಎಂದು ಹೇಳಿದ.

‌‌ ನಿನ್ನ ಮೊದಲೇ ಪ್ರಶ್ನೆ, ಆ ದೋಣಿ ಮತ್ತು ಅಂಬಿಗ.
ಆ ಅಂಬಿಗ ನದಿ ದಡದಲ್ಲಿ ರಾತ್ರಿ ಕಳೆಯಬೇಕಾಗುತ್ತದೆ. ದರೋಡೆಕೋರರು, ಒಂದು ಹಳ್ಳಿಯಲ್ಲಿ ದರೋಡೆ ಮಾಡುವುದಕ್ಕಾಗಿ, ಇದೇ ದೋಣಿಯನ್ನು ಬಳಸಿಕೊಂಡು ನದಿಯನ್ನು ದಾಟಿ ದರೋಡೆ ಮಾಡುವ ತಯಾರಿ ನಡೆಸಿದರು. ಅದರ ಸುಳಿವು ನನಗೆ ಗೊತ್ತಾಗಿ,ಆ ದೋಣಿಯಲ್ಲಿ ದೊಡ್ಡ ರಂದ್ರ ಕೊರದು ಬಿಟ್ಟೆ. ಆ ದೋಣಿಯಲ್ಲಿ ಅವರು ನದಿಯನ್ನು ದಾಟಲು ಸಾಧ್ಯವಿಲ್ಲ. ಆ ಹಳ್ಳಿಯನ್ನು, ನಾನು ಡಕಾಯಿತರಿಂದ ಉಳಿಸಿದೆ.

Address

New No4 University Rd Nagerbhavi Circle
Bangalore

Telephone

9448170873

Website

Alerts

Be the first to know and let us send you an email when SRI S Mahaveer GROUP Construction contactors posts news and promotions. Your email address will not be used for any other purpose, and you can unsubscribe at any time.

Share

Category