31/03/2024
ನಮಸ್ಕಾರ ಸ್ನೇಹಿತರೆ,
ಕುಟುಂಬ ಪೋಷಣೆಯ ಹೊಣೆ ಹೊತ್ತ ಪ್ರತಿಯೊಬ್ಬ, ಜವಾಬ್ದಾರಿ ವ್ಯಕ್ತಿಯ ಹಂಬಲ ಸ್ವಂತ ಮನೆಯ ಕನಸನ್ನು ಸಾಕಾರಗೊಳಿಸಿಕೊಳ್ಳುವುದು. ಆದರೆ ಇವತ್ತಿನ ರಿಯಲ್ ಎಸ್ಟೇಟ್ ಭರಾಟೆಯಲ್ಲಿ ಇದು, ಅಷ್ಟು ಸುಲಭದ ಮಾತೇನೂ ಅಲ್ಲ. ಮಹಾನಗರಗಳಲ್ಲಿ ಮಿತಿ ಮೀರಿದ ವಸತಿ ಮತ್ತು ನಿವೇಶನಗಳ ದರ, ವಾಯುಮಾಲಿನ್ಯ, ವಿಪರೀತ ವಾಹನ ದಟ್ಟಣೆ, ನೀರಿನ ಕೊರತೆ, ನಗರೀಕರಣದ ದುಷ್ಪರಿಣಾಮಗಳು, ಹೀಗೆ ಅನೇಕ ಸಮಸ್ಯೆಗಳ ಭಾರದಲ್ಲಿ ನಗರ ಜೀವನ, ಭಯಾನಕವಾಗಿ ಕಾಡುತ್ತಿದೆ. ಅನೇಕರಿಗೆ ನಗರದ ಬದುಕು ಸಾಕಾಗಿದೆ.ಆದರೆ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳಲೂ ಸಾಧ್ಯವಾಗದ ಸ್ಥಿತಿ. ಇಂತಹ ಗೊಂದಲದಲ್ಲಿರುವ ನಗರವಾಸಿಗಳನ್ನೇ ಗಮನದಲ್ಲಿರಿಸಿ, ವಿನೂತನ ಕಲ್ಪನೆಯೊಂದಿಗೆ, ಹೊಸ ಮಾದರಿಯೊಂದನ್ನು ತಮ್ಮ ಮುಂದಿಡುವುದು ನಮ್ಮ ಗುರಿ.
ಹಾಗಾಗಿಯೇ ಸಾಗರದಿಂದ 15 ಕಿಲೋಮೀಟರ್ ದೂರದ, ಪ್ರಸಿದ್ಧ ಹೆಗ್ಗೋಡು ಗ್ರಾಮದ ಸಮೀಪ ಹೊಸ ಮಾದರಿಯ ವಿಲ್ಲಾಗಳ (ಮನೆ) ನಿರ್ಮಾಣ ಮಾಡಿ, ಕೈಗೆಟುಕುವ ದರದಲ್ಲಿ, ಮಧ್ಯಮ ವರ್ಗದ ಜನರ ಕನಸಿನ ಸಾಕಾರಕ್ಕೆ ಒತ್ತಾಸೆಯಾಗಿ ನಿಲ್ಲಲು ಬಯಸಿದ್ದೇವೆ. ಈ ಕನಸಿನ ಸಾಕಾರಕ್ಕಾಗಿ "ನಂದಗೋಕುಲ ವಿಲ್ಲಾಸ್" ಎಂಬ ಹೆಸರಿನಲ್ಲಿ ಮುಂದಡಿ ಇಡುತ್ತಿದ್ದೇವೆ. ವ್ರಧ್ಧಾಪ್ಯದಲ್ಲಿಯೂ, ಸುಂದರ ಪರಿಸರದ ಮಧ್ಯೆ ನೆಮ್ಮದಿಯ ಬದುಕು ಸವೆಸಲು ಅನುವು ಮಾಡಿಕೊಡುವ, ಹೊಸ ಮಾದರಿಯ ಗ್ರಾಮವೊಂದರ ನಿರ್ಮಾಣದ ಯೋಜನೆ ಇದು.
ಯೋಜನೆಯ ರೂಪು-ರೇಷೆ ಹೀಗಿದೆ.
1. ಹತ್ತು ಎಕರೆಗೂ ಹೆಚ್ಚಿನ ವಿಶಾಲ ಸ್ಥಳಾವಕಾಶ.
2. 4,000 sq.ft. ಜಾಗದ ಹಂಚಿಕೆ.
3. ಸುಂದರ ಉದ್ಯಾನ.
4. ಮಕ್ಕಳ ಆಟದ ಅಂಗಳ.
5. ಈಜು ಕೊಳ.
6. ತ್ವರಿತ ವೈದ್ಯಕೀಯ, ಶುಶ್ರೂಷೆ ಗೆ ವ್ಯವಸ್ಥೆ.
7. ಪ್ರತಿ ವಿಲ್ಲಾಗಳಿಗೆ, ಪ್ರತ್ಯೇಕ ಔಷಧೀಯ ಹಾಗೂ ಅಲಂಕಾರಿಕ ಸಸ್ಯಗಳು.
8. 3 BHK ಯ ಸುಸಜ್ಜಿತ ಮನೆಗಳು.
9. ಧ್ಯಾನ ಮಂದಿರ.
10. ಅತ್ಯಾಧುನಿಕ ಸುರಕ್ಷತಾ ವ್ಯವಸ್ತೆ.
11. ಗೇಟೆಡ್ ಕಮ್ಯುನಿಟಿ.
12. ಹಳ್ಳಿಯ ಸುಂದರ ವಾತಾವರಣ, ಪೇಟೆಯ ಸೌಲಭ್ಯ.
13. ಅತ್ಯುತ್ತಮ ರಸ್ತೆ ಸಂಪರ್ಕ.
14. ಸುಸಂಸ್ಕೃತ ನಾಗರಿಕರ ಆಯ್ಕೆ.
ಇತ್ಯಾದಿ ಸೌಲಭ್ಯಗಳು.
ಈಗಾಗಲೇ ಯೋಜನೆಯ ಆರಂಭಿಕ ಹಂತದ ಪ್ರಕ್ರೀಯೆಗಳು ನಡೆದಿದ್ದು, ಕೆಲವೇ ದಿನಗಳಲ್ಲಿ ಬುಕಿಂಗ್ ಆರಂಭವಾಗುವುದು..ತಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ ನಾವಿದ್ದೇವೆ. ಧನ್ಯವಾದಗಳು. ಸಲಹೆ- ಸೂಚನೆಗಳಿಗೆ ತುಂಬು ಹೃದಯದ ಸ್ವಾಗತ..🙏🙏
"ಸರ್ವೇ ಜನಾ: ಸುಖಿನೋ ಭವಂತು. ಸರ್ವೇ ಸಂತು ನಿರಾಮಯಾ:"
ಸೂಚನೆ : ಸಸ್ಯಾಹಾರಿಗಳಿಗೆ ಮಾತ್ರ ಅವಕಾಶ.
ತಮ್ಮ ಅಭಿಪ್ರಾಯ ಮತ್ತು ಮಾರ್ಗದರ್ಶನದ ನಿರೀಕ್ಷೆಯಲ್ಲಿ.🙏
ಸುದರ್ಶನ್ ಭಟ್, ತಲಗಿಣಿ
ದೂರವಾಣಿ ಸಂ. : 6360170876